Advertisement

Tag: Kamalakar Kadave

“ಭವಿಷ್ಯದ ಕರಾಳತೆಯನ್ನು ಮುಂಗಂಡ ಎರಡು ಕಾದಂಬರಿಗಳು”

ಜಾಗತಿಕ ಪ್ರಭುತ್ವದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯಲ್ಲಿ ಗೋಚರಿಸುವ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ ‘ಎಲ್ಲರೂ ಎಲ್ಲರ ಸಂಬಂಧಿ’. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತಹ ‘ಕಾವುಮನೆ’ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಕಮಲಾಕರ ಕಡವೆ ಅಂಕಣದಲ್ಲಿ ಬ್ರೇವ್ ನ್ಯೂ ವರ್ಲ್ಡ್ ಕಾದಂಬರಿಯ ವಿಶ್ಲೇಷಣೆ. 

Read More

ಅರ್ಥಲೋಕದ ಬೆರಗುಗಳ ಅನಾವರಣ

ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ

Read More

ಮಹಾಸಾಂಕ್ರಾಮಿಕದ ಕಾದಂಬರಿಗಳು ನಮಗೆ ಕಲಿಸುವ ಪಾಠ

ವಿಶ್ವದ ಶ್ರೇಷ್ಠ ಸಮಕಾಲೀನ ಬರಹಗಾರರಲ್ಲಿ ಒಬ್ಬರಾದ ಓರ್ಹಾನ್ ಪಾಮುಖ್ ಟರ್ಕಿಯ ಬಹುಮಾನ್ಯ ಕಾದಂಬರಿಕಾರ. 2006ರಲ್ಲಿ ನೋಬೆಲ್ ಪ್ರಶಸ್ತಿಗೆ ಪಾತ್ರರಾದ ಪಾಮುಖ್ ಅವರ ಕೃತಿಗಳು ವಿಶ್ವದ ಅನೇಕಾನೇಕ ಭಾಷೆಗಳಲ್ಲಿ ಅನುವಾದಗೊಂಡಿವೆ. ಪಾಮುಖ್ 2020ರ ಏಪ್ರಿಲ್ನಲ್ಲಿ ಕರೋನಾ ವೈರಸ್ ಸಾಂಕ್ರಾಮಿಕದ ಕುರಿತಾಗಿ ಬರೆದ ಬರಹ ಇದು. ಕಮಲಾಕರ ಕಡವೆ ಅವರು ಆ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

Read More

ಆಧುನಿಕ ಜಗತ್ತಿನ ‘ಮಹಾತಿಪ್ಪೆ’ಯಲ್ಲಿ ಬಿದ್ದ ಮನುಷ್ಯ

“ಆಧುನಿಕ ಜೀವನಶೈಲಿ ಮನುಷ್ಯ ಅಸ್ತಿತ್ವವನ್ನು ಕುಬ್ಜಗೊಳಿಸುವುದರ ಜೊತೆಗೆ ಅವನ ತೀವ್ರ ಭಾವವಲಯಗಳನ್ನು, ಸೃಜನಶೀಲ ಆದರ್ಶಗಳ ಹಂಬಲಗಳನ್ನು ಗೇಲಿಮಾಡಿ ಅಪಹಾಸ್ಯಕ್ಕೀಡು ಮಾಡುವುದನ್ನು ಗುರುತಿಸಿರುವುದು ಸಂಕಲನದ ಹೆಚ್ಚುಗಾರಿಕೆಯಾಗಿದೆ. ಎಲ್ಲ ಕಡೆ ಮಾರುಕಟ್ಟೆಯ ಕಸ ತುಂಬಿರುವ, ವಸ್ತುಗುಡ್ಡಗಳು ಜನರನ್ನು ತಿಂದುತೇಗುವ, ಪ್ರತಿಬಿಂಬಗಳ ಮೆರವಣಿಗೆ ಸಾಗಿರುವ ದಟ್ಟವಾಸನೆಗಳ ನಗರದಲ್ಲಿ ಇದೇ ನಿರೂಪಕನ ಒಣನಾಲಿಗೆ ಜಡತ್ವ ಮೀರಿ…”

Read More

ಮರೆಯಾದ ಮಹಾಶಹರದ ಶೋಕಗೀತೆ

“ಶಹರದ ದಾರಿಗಳಲ್ಲಿ ಓಡಾಡುತ್ತ ಓರ್ಹಾನ್ ಇಸ್ತಾನ್‌ಬುಲ್ ಶಹರವನ್ನು ಓದುವ ಮತ್ತು ಅದರ ಕುರಿತು ಬರೆಯುವುದನ್ನು, ಅದರ ಕುರಿತು ಬರೆಯಲಾಗಿರುವ ಲೇಖನಗಳು ಮತ್ತು ಅದರ ಚಿತ್ರಗಳ ಮುಖೇನವೇ ಕಲಿತುಕೊಳ್ಳುತ್ತಾರೆ. ಇಸ್ತಾನ್‌ಬುಲ್ ಶಹರದ ಹಳೆಯ ಫೋಟೋಗಳು ಯುರೋಪಿನ ಮತ್ತು ಟರ್ಕಿಯ ಕಲಾವಿದರುಗಳು ಪ್ರಸ್ತುತಪಡಿಸಿರುವ ಶಹರದ ಸಂಸ್ಕೃತಿ, ಜೀವನಶೈಲಿ, ಇತಿಹಾಸ, ಕಲೆಗಳ ಕುರಿತಾದ ಟಿಪ್ಪಣಿಗಳನ್ನು ಒದಗಿಸುತ್ತವೆ. ಈ ಕೃತಿಯನ್ನು ಓದುತ್ತ ಹೋದ ಹಾಗೆ…”

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ