Advertisement

Tag: Mogalli Ganesh

ಮೂಡಿದ್ದವು ತರಾವರಿ ತಾರೆಗಳು

ಆ ರಾತ್ರಿ ನಾವು ದಲಿತ ಹುಡುಗರು ಪ್ರತಿಭಟನೆಯ ಭಾಗವಾಗಿ ಅಡುಗೆ ಮನೆಗೆ ಬೀಗ ಹಾಕಿದ್ದೆವು. ಹಾಗೇಯೇ ಅಂಬೇಡ್ಕರ್‌ಗೆ ಆದ ಅಪಮಾನದಿಂದ ನೊಂದು ಉಪವಾಸ ಆಚರಿಸುತ್ತೇವೆ ಎಂದು ಸ್ವಯಂ ದಂಡಿಸಿಕೊಂಡಿದ್ದೆವು. ಇಡೀ ಹಾಸ್ಟೆಲ್ ಬಿಕೊ ಎನ್ನುತ್ತಿತ್ತು. ನಾಲ್ವಡಿ ಅವರ ಕಾಲದ ತಳದ ಹಳೆಯ ಬಿಲ್ಡಿಂಗಿನಲ್ಲಿ ನಮಗೆ ರೂಮುಗಳು ಪ್ರತ್ಯೇಕವಾಗಿದ್ದವು. ಹೊಸ ಕಟ್ಟಡದಲ್ಲಿ ಅವರಿಗೇ ಮೊದಲು ಆದ್ಯತೆ ಇದ್ದದ್ದು. ಮೊಗಳ್ಳಿ ಗಣೇಶ್ ಬರೆಯುವ ಸರಣಿ.

Read More

ನೀಲಿ ಬರೆಗಳ ಮುಟ್ಟಿ ಮುಟ್ಟಿ ನೋಡಿದ

ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿನೈದನೆಯ ಕಂತು

Read More

ಅಮರಾವತಿ ಎಂಬ ಹುಚ್ಚಿಯ ವಿಸ್ಮಯ

ಉಸಿರಾಡಿದ್ದೆ ಅವಳೆದೆ ನಡುವೆ. ಏನೊ ಸುಖ ತೊಟ್ಟಿಲ ಕೂಸಂತೆ. ತಾಯನ್ನು ಅಪ್ಪ ಕೊಲ್ಲುವನು ಎಂಬುದು ಈ ಹುಚ್ಚಿಗೆ ಹೇಗೆ ಗೊತ್ತಾಯಿತು! ಯಾರಿಗೂ ಗೊತ್ತಿಲ್ಲದ್ದ ಹೇಗೆ ಪತ್ತೆ ಮಾಡಿದ್ದಳು. ಇವಳೆಂತಹ ಹುಚ್ಚಿ. ಇಲ್ಲವೇ ಯಕ್ಷಿಣಿ ಇರಬೇಕೇ? ಎಷ್ಟು ವಿಷಯಗಳೆಲ್ಲ ತಂತಾನೆ ಅವಳಿಗೆ ತಿಳಿಯುತ್ತಿದ್ದವು. ಅವತ್ತೊಂದಿನ ನಟ್ಟಿರುಳಲ್ಲಿ ನಾಳೆ ಬೆಳಿಗ್ಗೆ ಇಂತವರು ಸಾಯುತ್ತಾರೆ ಎಂದು ಹೇಳಿದ್ದಳು. ಹಾಗೇ ಆ ಊರ ದೊಡ್ಡ ಸಾಹುಕಾರ ಪ್ರಾಣ ಬಿಟ್ಟಿದ್ದ. ಒಹೋ; ಅವಳಲ್ಲಿ ಮೃತ್ಯು ದೇವತೆಯೂ ಸೇರಿಕೊಂಡಿದ್ದಾಳೆಂದು ಜನ ಅವಳ ಕಣ್ಣಿಂದ ತಪ್ಪಿಸಿಕೊಳ್ಳುತ್ತಿದ್ದರು. ಮೊಗಳ್ಳಿ ಗಣೇಶ್ ಸರಣಿ

Read More

ನನ್ನ ನಿರುಮ್ಮಳ ಇರುಳು ನನ್ನದು…

ಅಲ್ಲೊಂದು ಸಹಜ ಜಲ ಬಾವಿ ಇತ್ತು ಅನಾದಿಯಿಂದಲೂ. ಅದರ ಪವಿತ್ರ ಜಲದಿಂದಲೇ ಆ ಕಾಲದ ವೈದಿಕರು ಧರ್ಮ ಕಾರ್ಯ ಎಸಗುತ್ತಿದ್ದುದು… ಅದಕೆಂದೇ ಆ ಗೊಂಡಾರಣ್ಯ ಪ್ರಸಿದ್ಧವಾಗಿತ್ತು ಆ ಕಾಲಕ್ಕೆ. ಈಗದು ಒಂದು ಹೊಂಡವಾಗಿತ್ತು. ಬೇಸಿಗೆಯಲ್ಲಿ ದಾಹಕ್ಕಿಳಿದ ಪ್ರಾಣಿಗಳು ಆ ಸನಾತನ ಜಾರಿನ ಹೂಳಿನಲ್ಲಿ ಸಿಲುಕಿ ಎದ್ದು ಬರಲಾರದೆ ಅಲ್ಲೇ ಸಮಾಧಿ ಆಗಿದ್ದವು. ಬಾಯಾರಿ ಅಲ್ಲಿ ಸಿಲುಕಿದವರ ಪಾಡನ್ನು ಅರ್ಥಮಾಡಿಕೊಳ್ಳಿ! ಧರ್ಮ ಸೂಕ್ಷ್ಮವನ್ನು ನಾಳೆ ಅರ್ಥ ಮಾಡಿಕೊಳ್ಳಿ ಮಕ್ಕಳೇ; ಈಗಲೇ ಹೇಳಬಾರದು!

Read More

ಮುಸುಕಿನ ಮರೆಯ ಪಾಡು

ನಾವು ಹುಟ್ಟಿ ಬೆಳೆದಿದ್ದ ಊರಲ್ಲಿ ಚಿಕ್ಕಪ್ಪ ಎಂಬುವವನೊಬ್ಬ ಇದ್ದ. ರಭಸವಾದ ಕುಡುಕ. ಎಣ್ಣೆ ಕೊಡಿಸಿದರೆ ಎಲ್ಲಾ ನ್ಯಾಯವನ್ನು ತಲೆಕೆಳಗೆ ಮಾಡುತ್ತಿದ್ದ. ಆ ಮನೆಯಲ್ಲಿ ನನ್ನ ತಮ್ಮನಿಗೂ ನನಗೂ ಭಾಗ ಬರಬೇಕಿತ್ತು. ನಾನದರತ್ತ ತಿರುಗಿಯೂ ನೋಡಿರಲಿಲ್ಲ. ತಮ್ಮ ಬೆಂಗಳೂರು ಸೇರಿ ಅಲ್ಲೇ ಸಂಸಾರ ಹೂಡಿ ಒಂದು ಪುಟ್ಟ ಮನೆಯನ್ನು ಮಾಡಿಕೊಂಡಿದ್ದ. ಅವನಿಗೂ ಅಂತಹ ಆಸಕ್ತಿ ಇರಲಿಲ್ಲ. ಆದರೆ ನನ್ನಕ್ಕ ಬಿಟ್ಟಿರಲಿಲ್ಲ. ನಾವು ಭಾಗ ಕೊಡುವುದಿಲ್ಲ ಎಂದು ಅವನ ಮಗ ಹಾಗೂ ಹೆಂಡತಿ ಎಗರಾಡುತ್ತಿದ್ದರು.
ಮೊಗಳ್ಳಿ ಗಣೇಶ್‌ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂರನೆಯ ಕಂತು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ