Advertisement

Tag: Mysore

ಸೃಜನಶೀಲತೆಯ ಬೆಳಕಿನಲ್ಲಿ ವಿಜ್ಞಾನವೂ ಸಿದ್ಧಾಂತವೂ

ತನ್ನ ಬಾಲ್ಯದ ಧಾರ್ಮಿಕತೆಯ ತತ್ತ್ವವು ವಸ್ತುನಿಷ್ಠವಾಗಿ ಸಂಶೋಧನೆ ನಡೆಸಬೇಕಾದ ವಿಜ್ಞಾನಿಯ ದೃಷ್ಟಿಯನ್ನು ಪ್ರಭಾವಿಸುತ್ತದೆಯೆ? ಅದರಿಂದಾಗಿ ಕೆಲವೊಮ್ಮೆ ಧನಾತ್ಮಕ, ಇನ್ನು ಕೆಲವೊಮ್ಮೆ ಋಣಾತ್ಮಕ ಫಲಿತಾಂಶಗಳಿಗೆ, ವಾಸ್ತವದಿಂದ ದೂರವಾದ ಸಿದ್ಧಾಂತಗಳಿಗೆ ಅದು ಎಡೆಮಾಡಿಕೊಡಬಹುದೆ ಎಂಬ ಪ್ರಶ್ನೆಗಳನ್ನು ಪದರ ಪದರವಾಗಿ ಬಿಡಿಸಿಡುವ ನಾಟಕವಿದು. ನಿರ್ದೇಶನ  ಅತ್ಯಂತ ಪರಿಣಾಮಕಾರಿಯಾದುದು. ದೇಹಭಾಷೆ ಮತ್ತು ಧ್ವನಿಯ ಏರಿಳಿತಗಳ ಮೂಲಕ ಸಲಾಂ ಅವರ ಹತಾಶೆ, ನೋವುಗಳನ್ನು ಅಭಿವ್ಯಕ್ತಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ‘ಅಬ್ದುಸ್ ಸಲಾಮ್ ಅವರ ವಿಚಾರಣೆ’ ನಾಟಕದ ಕುರಿತು ಡಾ. ಸುದರ್ಶನ ಪಾಟೀಲಕುಲಕರ್ಣಿ ಬರಹ

Read More

‘ಶಿಲಾಲತೆ’ಯಲ್ಲಿ ಪದುಮಳ ಬಳೆಗಳ ದನಿಯಿಲ್ಲವಲ್ಲ

ಕೆ.ಎಸ್. ನರಸಿಂಹ ಸ್ವಾಮಿ ಅವರು ಪ್ರೇಮಕವಿಯಾಗಿ ಸುಪ್ರಸಿದ್ಧರಾದರೂ ಅವರು ಬದುಕಿನ ಜಿಜ್ಞಾಸೆಗಳ ಬಗ್ಗೆ, ಅಧ್ಯಾತ್ಮದ ಕುರಿತು, ಇತರ ಸಂದಿಗ್ಧಗಳ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಿದ್ದಾರೆ. ಅವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು… ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು. ಅವರ ಜನ್ಮದಿನವಾದ ಇಂದು, ಅವರ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ‘ಶಿಲಾಲತೆ’ಯ ನಲವತ್ತರ ಚೆಲುವೆಯ ಬಗ್ಗೆ ವಿಶ್ಲೇಷಣಾ ಬರಹ ಬರೆದಿದ್ದಾರೆ ಲೇಖಕಿ ಮಾಲಿನಿ ಗುರುಪ್ರಸನ್ನ.

Read More

ತ್ರಿಮೂರ್ತಿಗಳನ್ನು ರಂಗದ ಬದುಕಿನ ಚಿತ್ರಗಳೊಂದಿಗೆ ಸಮೀಕರಿಸುತ್ತ…

‘ಕಾಯೌ ಶ್ರೀಗೌರಿ..’ ಎಂಬ ನಾಡಗೀತೆಯನ್ನು ಅಂದು ಬರೆದಿದ್ದ ಬಸವಪ್ಪ ಶಾಸ್ತ್ರಿಗಳು ನೆನಪಾಗುತ್ತಾರೆ. ಮೈಸೂರನ್ನು ನಾವಿಂದು ಸಾಂಸ್ಕೃತಿಕ ನಗರಿ ಎಂದು ಕರೆದುಕೊಳ್ಳುತ್ತೇವೆ. ವಿದ್ವತ್ತಿಗೆ ಹೆಸರಾದದ್ದು ಎಂದು ತಿಳಿದೇ ಇದೆ. ಇಷ್ಟಿದ್ದೂ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಕಡೆಗೆ ಅಸಡ್ಡೆ ಯಾಕೆ ಮತ್ತು ಹೇಗೆ ಬೆಳೆಯಿತೋ ಗೊತ್ತಿಲ್ಲ. ಮೈಸೂರಿನಲ್ಲಿರುವ ಎಲ್.ಐ.ಸಿ ಬಿಲ್ಡಿಂಗ್ ಬಳಿ ರಸ್ತೆ ಪಕ್ಕದಲ್ಲಿ ಬಸವಪ್ಪ ಶಾಸ್ತ್ರಿಗಳ ಸ್ಮಾರಕವಿದೆ. ಅದರ ಬಣ್ಣ ಮಾಸಿ, ಗೋಡೆಗಳ ಮೇಲೆಲ್ಲ ಬಳ್ಳಿ ಹಬ್ಬಿಕೊಳ್ಳುವಷ್ಟು ನಿರ್ಲಕ್ಷ್ಯವೇಕೆ..”

Read More

ಹಳೆಯ ಮೈಸೂರಿನ ಪಳೆಯ ಮುಖಗಳು: ಅಬ್ದುಲ್ ರಶೀದ್ ಅಂಕಣ

ಹೀಗೆ ಇರುವುದರಿಂದಲೇ ಅವರು ಈ ಇಳಿ ವಯಸಿನಲ್ಲೂ ನಗೆ ಚಟಾಕಿಗಳನ್ನು ಹಾರಿಸುತ್ತಾ, ಶೇಕ್ಸ್ ಪಿಯರನ ಸಾಲುಗಳನ್ನು ಉಲ್ಲೇಖಿಸುತ್ತಾ, ನಡುನಡುವಲ್ಲಿ ಟೇಪ್ ರೆಕಾರ್ಡಿನಲ್ಲಿ ಹಳೆಯ ಹಾಡುಗಳನ್ನು ಕೇಳುತ್ತಾ ಬದುಕುತ್ತಿದ್ದರು.

Read More

ಭಾರತಿ ಬರೆದ ಮೈಸೂರು ಪ್ರವಾಸ ಕಥಾನಕ

‘ಆಂಟಿ ಕಾಸು ಕೊಟ್ರೆ ಬುಕ್ ತಗೊಳ್ತೀನಿ … ಓದಕ್ಕೆ ತುಂಬ ಇಷ್ಟ ಆಂಟಿ .. ಪ್ಲೀಸ್ … ’ ಅನ್ನುತ್ತಾ. ‘ಚೆನ್ನಾಗಿ ಓದು ಮರಿ .. ದುಡ್ಡು ಹಾಳು ಮಾಡ್ಬೇಡಾ’ ಅನ್ನುತ್ತಾ ಸ್ವಲ್ಪ ಹಣ ಕೊಟ್ಟೆ. ಒಂದು ಬುಕ್ ಬಂದರೆ ಅಷ್ಟೇ ಬರಲಿ .. ಎರಡು ಬಂದರೆ ಅಷ್ಟೇ ಬರಲಿ ಅಂದುಕೊಂಡೆ. ಆ ನಂತರ ಸಿನಿಮಾದಲ್ಲಿ ದೇವರು ಅಂತರ್ಧಾನನಾದ ಹಾಗೆ ಮಾಯವಾದ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ