Advertisement

Tag: Poetry

‘ಶಿಲಾಲತೆ’ಯಲ್ಲಿ ಪದುಮಳ ಬಳೆಗಳ ದನಿಯಿಲ್ಲವಲ್ಲ

ಕೆ.ಎಸ್. ನರಸಿಂಹ ಸ್ವಾಮಿ ಅವರು ಪ್ರೇಮಕವಿಯಾಗಿ ಸುಪ್ರಸಿದ್ಧರಾದರೂ ಅವರು ಬದುಕಿನ ಜಿಜ್ಞಾಸೆಗಳ ಬಗ್ಗೆ, ಅಧ್ಯಾತ್ಮದ ಕುರಿತು, ಇತರ ಸಂದಿಗ್ಧಗಳ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಿದ್ದಾರೆ. ಅವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು… ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು. ಅವರ ಜನ್ಮದಿನವಾದ ಇಂದು, ಅವರ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ‘ಶಿಲಾಲತೆ’ಯ ನಲವತ್ತರ ಚೆಲುವೆಯ ಬಗ್ಗೆ ವಿಶ್ಲೇಷಣಾ ಬರಹ ಬರೆದಿದ್ದಾರೆ ಲೇಖಕಿ ಮಾಲಿನಿ ಗುರುಪ್ರಸನ್ನ.

Read More

ಅನ್ವೇಷಣೆ ನಿರತ ಅನವರತ ಚಿತ್ತಪಥದ ಕವಿತೆಗಳತ್ತ…

ನಿಜಾರ್ಥದ ಕವಿ ಗೊತ್ತಿರುವುದನ್ನು ವಿವರಿಸುವುದಿಲ್ಲ, ಅರ್ಥಮಾಡಿಕೊಂಡಿದ್ದನ್ನು ಅರ್ಥಮಾಡಿಸುತ್ತಾನೆ. ಅಸ್ತಿತ್ವದ ಹುಡುಕಾಟ ವ್ಯಸನವಾಗುತ್ತ ಪ್ರೇಮ ಕಾಮ ಕೊನೆಗೆ ಸ್ವಾರ್ಥದೊಂದಿಗೂ ತಾದ್ಯಾತ್ಮ ಸ್ಥಾಪಿತವಾಗದ ಸ್ಥಿತಿಯಲ್ಲಿ ಪದರು ಪದರಾಗಿ ವಿಕಸನಗೊಂಡ ಪ್ರಜ್ಞೆ ಕಣ್ಣಾಮುಚ್ಚಾಲೆಯ ದೈನಿಕಗಳಲ್ಲಿ ಲೀನವಾಗುವ ಕ್ರಮವನ್ನು ಕಾಣಿಸುವ ವಿಶಿಷ್ಟ ಕವನಗಳಿವು. ನಾವೇ ಸೃಷ್ಟಿಸಿಕೊಂಡ ನರಕದಲ್ಲಿ ದೂರುಗಳು ತಪ್ಪೊಪ್ಪಿಗೆಯನ್ನು ಧ್ವನಿಸುತ್ತವೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಇಂದ್ರಕುಮಾರ್ ಎಚ್.ಬಿ. ಅವರ “ಬಾವಿಗ್ಯಾನವ ಮರೆತು” ಕವನ ಸಂಕಲನಕ್ಕೆ ಮಮತಾ ಆರ್. ಬರೆದ ಮುನ್ನುಡಿ

Read More

ಲಾಂಡೇಯ್: ಅಫ್ಘನ್ ಹೆಣ್ಣುಮಕ್ಕಳ ಅಕ್ಷರಸಮರ

ಲಾಂಡೇಯ್ ಸುತ್ತಲಿನ ಲೋಕದ ಕುರಿತಾದ ಗಹನ ವಿಚಾರಗಳನ್ನು, ಕಟುವಾಸ್ತವಗಳನ್ನು ಹಿಡಿದಿಡುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮ. ಹಾಗಾಗಿ, ಲಾಂಡೇಯ್ ರಚನೆಗಳು ನೋವಿನಿಂದ ಕೂಡಿರಬಹುದು ಅಥವಾ ಕಠೋರ ಟೀಕೆಯಿಂದ; ಹಾಸ್ಯದಿಂದ ತುಂಬಿರಬಹುದು ಅಥವಾ ವ್ಯಂಗ್ಯದಿಂದ. ಹಾಗೆಂದು, ಲಾಂಡೇಯ್ ಕೇವಲ ಬಂಡಾಯ ಕಾವ್ಯವೆಂದೇನೂ ಅಲ್ಲ; ಶೋಕ, ಪ್ರೇಮ, ದುರಂತಗಳೂ ಅದಕ್ಕೆ ಗ್ರಾಸವಾಗುವ ವಿಷಯವಾಗಬಹುದು. ಎಲ್ಲ ಕಾವ್ಯವೂ ಮೂಲದಲ್ಲಿ ಲಾಂಡೇಯ್ ತರವೇ ಅಲ್ಲವೇ – ಕರೆಯುವುದು…”

Read More

ತೇಜಾವತಿ ಎಚ್‌ ಡಿ ಬರೆದ ಕವಿತೆ: ಸೆಣೆಸಾಡುವ ಬಣ್ಣ

“ಅಲ್ಲಿ ಸಮರಗಳು ಕಾಲು ಕೆರೆಯುತ್ತಿವೆ
ವರ್ಣರಂಜಿತ ಓಕುಳಿಯಾಡಲು
ಇಲ್ಲಿ ಬಣ್ಣಗಳು ಸೆಣೆಸಾಡುತ್ತಿವೆ
ಕೆಂಪು ಹಸಿರು ನೀಲಿ ಚೆಲ್ಲಿ
ಅರಿವಿಲ್ಲದೆ ಮೂಲದ್ರವ್ಯದ ವರ್ಣ
ರಜತಬಿಲ್ಲಿಗೆ ಗೊತ್ತು ಎಲ್ಲವುಗಳ ಮರ್ಮ”- ತೇಜಾವತಿ ಎಚ್‌ ಡಿ ಬರೆದ ಈ ದಿನದ ಕವಿತೆ

Read More

ಘೇಂಡಾಮೃಗ: ಕೆ.ವಿ.ತಿರುಮಲೇಶ್ ಬರೆದ ಕವಿತೆ

ಬಡ ಘೇಂಡಾದ ಅಶಕ್ತ ಬಾಹುಗಳ ಒಳಕ್ಕೆ
ಸಿಗದು ಇಹದ ಯಾವುದೇ ಸಂಪತ್ತು.
ಆದರೆ ಒಂದಿಂಚೂ ಕದಲಬೇಕಾದ್ದಿಲ್ಲ ಅನುದಾನಕ್ಕೆ
ನಮ್ಮ ಜೈ ಕನ್ನಡ ಸಾಹಿತ್ಯ ಪರಿಷತ್ತು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ