Advertisement

Tag: Yogindra Maravanthe

ಒಂದು ಆಕಾಶ, ಹಲವು ಏಣಿಗಳು: ಯೋಗೀಂದ್ರ ಮರವಂತೆ ಬರಹ

ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು ಬಂತೋ ಕರಾರುವಕ್ಕಾಗಿ ಹೇಳಿದವರಿಲ್ಲವಾದರೂ ಬಾನಿನಲ್ಲಿ ಸ್ವಚ್ಛಂದವಾಗಿ ಹಾರಿ ಇಳಿಯುವ ಹಕ್ಕಿಗಳನ್ನು ನೋಡಿ ನಮಗೂ ಹಾರುವ ಕನಸು ಹುಟ್ಟಿತು. ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಿದವು ಎನ್ನುವ ಉಲ್ಲೇಖಗಳು ಓದಿನಲ್ಲಿ ಸಿಗುತ್ತವೆ.
ಯೋಗೀಂದ್ರ ಮರವಂತೆ ಬರೆದ ವಿಮಾನ ಲೋಕದ ಅಚ್ಚರಿ, ಅನುಭವಗಳ ಕುರಿತ ಹೊಸ ಕೃತಿ “ಏರೋ ಪುರಾಣ”ದ ಒಂದು ಬರಹ ನಿಮ್ಮ ಓದಿಗೆ

Read More

ಲಂಡನ್ನಿನ ಸ್ಮರಣೆಯಲ್ಲಿ ದೇಶಭಕ್ತ ತಾತ್ವಿಕರು…

ನ್ಯಾಯಾಂಗ ಹೋರಾಟದ ಸೋಲು ತಿಲಕರ ಖ್ಯಾತಿಯನ್ನು ವರ್ಚಸ್ಸನ್ನು ಹೆಚ್ಚಿಸಿತ್ತು. ದಂತಕತೆಯಾಗಿದ್ದ ಪ್ರಸಿದ್ಧ ಪತ್ರಿಕೋದ್ಯಮಿ ಬೆಂಜಮಿನ್ ಹಾರ್ನಿಮನ್ ಸಂಪಾದಕತ್ವದ “ಬಾಂಬೆ ಕ್ರೋನಿಕಲ್” ಪತ್ರಿಕೆ “ಬ್ರಿಟಿಷ್ ಜ್ಯೂರಿ ಮತ್ತು ನ್ಯಾಯಾಧೀಶರು ಲೋಕಮಾನ್ಯ ತಿಲಕರ ಬಗ್ಗೆ ಹೇಳಿದುದನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಜನರ ಪ್ರೀತಿಯ ಹೃದಯಸಿಂಹಾಸನದಿಂದ ತಿಲಕರನ್ನು ಕೆಳಗಿಳಿಸುವಲ್ಲಿ ಕೋರ್ಟಿನ ನಿರ್ಣಯಗಳೆಲ್ಲ ನಿರರ್ಥಕ” ಎಂದು ಬರೆದಿತ್ತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯ ಕೊನೆಯ ಕಂತಿನಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಬಾರ್ಡೋಲಿಯ ಸರ್ದಾರರ ಬ್ಯಾರಿಸ್ಟರ್ ದಿನಗಳು

ಹೈಸ್ಕೂಲಿನಲ್ಲಿ ಕೋಲಿನಿಂದ ಯಾವಾಗಲೂ ಮಕ್ಕಳನ್ನು ವಿಪರೀತ ಹೊಡೆಯುತ್ತಿದ್ದ, ವಿದ್ಯಾರ್ಥಿಗಳಿಗೆ ದೊಡ್ಡ ದಂಡ ವಿಧಿಸುತ್ತಿದ್ದ ಶಿಕ್ಷಕರೊಬ್ಬರ ವರ್ತನೆಯನ್ನು ಪ್ರತಿಭಟಿಸಿ ಗಲಾಟೆ ಮಾಡಿದ್ದರು. ಸಹವಿದ್ಯಾರ್ಥಿಗಳನ್ನು ಸಂಘಟಿಸಿ ತರಗತಿ ಬಹಿಷ್ಕರಿಸಿದ್ದರು. ಪಟೇಲರು ಸಂಘಟಿಸಿದ ಶಾಲಾದಿನಗಳ ಮೊದಲ ಮುಷ್ಕರ ಮೂರನೆಯ ದಿನಕ್ಕೆ ಕಾಲಿಟ್ಟಾಗ, ಹುಡುಗನ ನಾಯಕತ್ವ ಮತ್ತು ಸಂಘಟನೆಯನ್ನು ಗುರುತಿಸಿದ ಪ್ರಾಂಶುಪಾಲರು ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಗಳನ್ನು ಮುಂದೆಂದೂ ಆ ಅಧ್ಯಾಪಕರು ಕಟುವಾಗಿ ಶಿಕ್ಷಿಸದಿರುವ ಆಶ್ವಾಸನೆ ನೀಡಿದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಯುದ್ಧಕಾಲದ ಸಿಗಾರುಪ್ರಿಯ ನಾಯಕ

1932ರಲ್ಲಿ ಚರ್ಚಿಲ್ ತನ್ನ ಪೂರ್ವಜರ ಇತಿಹಾಸ ಹುಡುಕಿ ಬರೆಯಲು ಯುರೋಪ್ ತಿರುಗಾಟದಲ್ಲಿದ್ದಾಗ ಜರ್ಮನಿಯಲ್ಲಿ ಹಿಟ್ಲರ್‌ನನ್ನು ಭೇಟಿಯಾಗಲು ಬಯಸಿದ್ದರು. ಹಿಟ್ಲರ್ ಭೇಟಿಗೆ ಪೂರ್ವದಲ್ಲಿ ತಾನು ಕೇಳಬೇಕೆಂದುಕೊಂಡ ಪ್ರಶ್ನೆಗಳನ್ನು ಬರೆದೂ ತಪುಪಿಸಿದ್ದರು. ಅವುಗಳಲ್ಲೊಂದು ಯಹೂದಿ ದ್ವೇಷದ ಕುರಿತಾದ “ಯಾವುದೇ ಮನುಷ್ಯ ತಾನು ಎಲ್ಲಿ ಹುಟ್ಟುವೆ ಎಂದು ಹೇಗೆ ನಿರ್ಧರಿಸಲು ಸಾಧ್ಯ?” ಎಂಬುದಾಗಿತ್ತು. ಇಂತಹ ಪ್ರಶ್ನೆಗಳೇ ಅಂದು ಇಬ್ಬರು ನಾಯಕರ ಭೇಟಿ ರದ್ದಾಗಲು ಕಾರಣ ಆಗಿರಬೇಕು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ

Read More

ಕೊನೆಯ ಸಿಖ್ ದೊರೆಯ ಹತಾಶ ಚರಿತೆ

ತಾಯಿಯಿಂದ ದೂರವಾಗಿ ಕೆಲವು ವರ್ಷಗಳ ನಂತರ, ನೇಪಾಳದಲ್ಲಿ ಆಕೆ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು. ದುಲೀಪ್ ಸಿಂಗ್ ಅಮ್ಮನಿಗೆ ಹಲವು ಪತ್ರಗಳನ್ನು ಬರೆದಿದ್ದ. ನಿರಂತರ ಕೋರಿಕೆಯ ನಂತರ ಕೊಲ್ಕತ್ತಾದಲ್ಲಿ ತಾಯಿ-ಮಗನ ಭೇಟಿಗೆ ವ್ಯವಸ್ಥೆ ಮಾಡಲಾಯಿತು. 13 ವರ್ಷಗಳ ನಂತರ ಕಾಣಸಿಕ್ಕ ಮಗ ನಯವಾಗಿ ಮುಖ ಕ್ಷೌರ ಮಾಡಿಕೊಂಡು “ಜಂಟಲ್ಲ್ಮ್ಯಾನ್” ಆಗಿದ್ದನ್ನು ನೋಡಿ, ಸಿಖ್ ಸಾಮ್ರಾಜ್ಯ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ದುಃಖ ಪಂಜಾಬಿ ಅಸ್ಮಿತೆಯನ್ನು ಅಳಿಸಿಕೊಂಡ ಮಗನಿಂದ ಆಯಿತು ಎಂದಿದ್ದಳಂತೆ ಜಿಂದಾ ಕೌರ್.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕೊನೆಯ ಸಿಖ್ ದೊರೆ ದುಲೀಪ್ ಸಿಂಗ್ ಜೀವನದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ