ಗಾಂಧಿತಾತ

ಗಾಂಧಿತಾತ ನಮ್ಮತಾತ
ದೇಶಕ್ಕಾಗಿ ಮಡಿದ
ಮಹಾತ್ಮಾನಾತ…|| ಪ||

ಬಾಲ ಮೋಹನ ಗಾಂಧಿ
ತಾಯಿ-ಗುರುವಿನ ಮಾತಿನಲ್ಲೇ
ಜಗವ ಬೆಳಗಲು ಹೊರಟುಬಿಟ್ಟ…|| ೧||

ಶಾಲೆಯಲ್ಲಿ ಜಾಣನಲ್ಲ
ನೀತಿಯಲ್ಲಿ ಜಗವಬಲ್ಲ
ಅಂತರಾತ್ಮ ಬಂಧದಲ್ಲಿ ನಡೆದುಬಿಟ್ಟ….|| ೨||

ಬಡವ ನನ್ನ ದೇಶ
ಕೋಟು ಸೂಟು ಬೇಡ
ಪಂಚೆವುಟ್ಟು ಸಾಗಿಬಿಟ್ಟ…|| ೩||

ಅಸ್ತ್ರ ಎಂದು ಹಿಡಿಯಲಿಲ್ಲ
ಹನಿ ರಕ್ತ ಚೆಲ್ಲಲಿಲ್ಲ
ಯುದ್ಧ ಮಾತ್ರ ಗೆದ್ದುಬಿಟ್ಟ….|| ೪||

ಸತ್ಯಾಗ್ರಹ ಶಸ್ತ್ರದಿಂದ
ಅಹಿಂಸೆ ಮಾರ್ಗದಲ್ಲಿ
ಬ್ರಿಟಿಷರನ್ನು ನಡುಗಿಸಿಟ್ಟ…|| ೫||

ಮಾಡು ಇಲ್ಲ ಮಡಿ
ದೇಶ ಬಿಟ್ಟು ನಡಿ ಎನುತಾ
ಬ್ರಿಟಿಷರನ್ನು ತೊಲಗಿಸಿಟ್ಟ…|| ೬||

ಸತ್ಯ ಶಾಂತಿ ನ್ಯಾಯ ಕರ್ಮ
ಸಹನೆ ಪ್ರೀತಿ ನನ್ನ ಧರ್ಮ ಎನುತಾ
ಅಜ್ಞಾನ ಅಂಧಕಾರವ ಕಳಚಿಬಿಟ್ಟ….|| ೮||

ನನ್ನ ಜೀವನವೇ
ನನ್ನ ಸಾರ ಎನ್ನುತಾ
ಬದುಕಿಬಿಟ್ಟ….|| ೯||

 

ಮಲಿಕಜಾನ ಶೇಖ
ಸಂಖ, ಜತ್ತ (ಮಹಾರಾಷ್ಟ್ರ)