Advertisement

Category: ಅಂಕಣ

ಕನ್ನಡದಲ್ಲಿ ಡಾರ್ಕ್ ಹ್ಯೂಮರ್ ಪ್ರಯೋಗ: ಶ್ರೀಹರ್ಷ ಸಾಲಿಮಠ ಅಂಕಣ

“ಡಾರ್ಕ್ ಹ್ಯೂಮರ್ ನಮ್ಮ ಸಮಾಜದಲ್ಲಿ ಬೆಳೆಯದಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಮೇಲ್ ಸಮುದಾಯದ ಜನರು ಡಾರ್ಕ್ ಹ್ಯೂಮರ್ ಅನ್ನು ಸಹಿಸಿಕೊಳ್ಳುವಷ್ಟು ಹೃದಯ ವೈಶಾಲ್ಯ ಹೊಂದಿರದಿರುವುದು. ಎರಡನೆಯದು ಕೆಲ ಸಮುದಾಯಗಳು ಡಾರ್ಕ್ ಹ್ಯೂಮರ್ ತಡೆದುಕೊಳ್ಳುವಷ್ಟು ಸಾಮಾಜಿಕ ಬಲಿಷ್ಠತೆ ಪಡೆಯದಿರುವುದು. ಜಾತಿ, ಧರ್ಮ, ಲಿಂಗ, ಭೂಗೋಳ, ಸಮಾಜ, ವೇಷಭೂಷಣ..”

Read More

ಮನುಷ್ಯನ ಮನಸ್ಸಿನ ಏರಿಳಿತಗಳು: ವಿನತೆ ಶರ್ಮ ಅಂಕಣ

“ಈ ಯೋಚನೆಗಳಲ್ಲಿ ಮುಳುಗಿದ್ದಾಗ ಮರುದಿನ ಶುಕ್ರವಾರ ತಾಯಿಯೊಬ್ಬಳು ತನ್ನ ಒಂಭತ್ತು ವರ್ಷ ವಯಸ್ಸಿನ ಮಗನನ್ನು ರಕ್ಷಿಸಲು ಕೈಗೊಂಡ ಕ್ರಮದ ಸುದ್ದಿ ಬಂತು. ಅವಳು ನನ್ನ ಸ್ನೇಹಿತೆಯೊಬ್ಬಳ ಸ್ನೇಹಿತೆ, ನನಗೂ ಪರಿಚಿತೆ. ಅವಳ ಮಗನನ್ನೂ ನಾವು ನೋಡಿದ್ದಿತ್ತು. ಅವನು ಕುಬ್ಜತೆ ಎಂಬ ದೈಹಿಕ ಸ್ಥಿತಿಗೆ ಗುರಿಯಾಗಿ ಅವನ ವಯಸ್ಸಿನ ಬೇರೆ ಮಕ್ಕಳಂತೆ ಶಾರೀರಿಕ ಬೆಳವಣಿಗೆಯನ್ನು ಪಡೆದಿಲ್ಲ. ತಲೆ ದೊಡ್ಡದು, ದೇಹ ಕುಬ್ಜ ಎಂಬಂಥ ರೂಪವಿದೆ. ಜನರ ದೃಷ್ಟಿ ಅವನೆಡೆ ಹೊರಳಿದಾಗ ಅವನನ್ನು ಎರಡೆರಡು ಬಾರಿ ದಿಟ್ಟಿಸಿ ನೋಡುತ್ತಾರೆ.”

Read More

ಮೌನಕ್ಕೆ ಮೌನವೇ ಹೊರಬರುವ ಹಾದಿಯಾದಾಗ…: ಆಶಾಜಗದೀಶ್ ಅಂಕಣ

“ಒಬ್ಬ ಕವಿ ತಾನು ಪ್ರಪಂಚವನ್ನು ನೋಡಿ ಗ್ರಹಿಸಿದ್ದು ಒಂದು ಬಗೆಯ ಜ್ಞಾನವಾದರೆ ಪ್ರಪಂಚ ಅವನಿಗೆ ಅನಿವಾರ್ಯವಾಗಿ ಕಲಿಸಿದ ಅಥವಾ ನೀಡಿದ ಜ್ಞಾನ ಮತ್ತೊಂದೇ ಬಗೆಯದು. ಕವಿ ಇದೆರೆಡರ ಸಮಪಾಕದಲ್ಲಿ ಬೆಂದು ಬರೆದಾಗ ಕವಿತೆ ಯಾರನ್ನಾದರೂ ಮುಟ್ಟಿ ತಟ್ಟಬಲ್ಲದು. ಮತ್ತೆ ಗ್ರಹಿಕೆ ಯಾವ ಬಗೆಯದ್ದೇ ಇರಲಿ ನನ್ನ ಗ್ರಹಿಕೆ ಎನ್ನುವುದು ಬಹಳ ಸೀಮಿತ ಕ್ಷಿತಿಜ. ಅದನ್ನು ಸಾಮಾನ್ಯೀಕರಿಸುವ ಹೊತ್ತಿನಲ್ಲಿ ಒಂದು ಕಾಳಜಿ ಒಂದು ಜಾಗ್ರತೆ ಬೇಕೇಬೇಕಿರುತ್ತದೆ.”

Read More

ವಿಳಾಸದ ಅಂದದ ಬೆಡಂಗಿನ ಪೆಂಡಿರೇ ಪೆಂಡಿರಲ್ಲಿಯಾ: ಆರ್. ದಿಲೀಪ್ ಕುಮಾರ್ ಅಂಕಣ

“ಒಂದಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಪರಿಸರವನ್ನು ಕಟ್ಟಿಕೊಡುವ ಪಂಪನ ಕಲೆ ಬಹುಮುಖ್ಯವಾಗುತ್ತದೆ. ಯಾವುದೇ ರಸವೂ ಅದು ಸ್ಪಷ್ಟವಾಗಿ ಗ್ರಹಿಕೆಗೆ ಬರುವುದು ಅಲ್ಲಿನ ಪರಿಸರದ ಆಧಾರದ ಮೇಲೆ. ಇಲ್ಲಿ ಕತ್ತಲಾಗಿದೆ, ಪೆಂಡವಾಸದ ಮನೆಯ ಮುಂದೆ ಹೋಗುತ್ತಿದ್ದಾನೆ, ಮಬ್ಬು ಗತ್ತಲು, ಬಾಗಿಲ ಮುಂದೆ ಜಗುಲಿಗಳ ಮೇಲೆ ಕುಳಿತಿರುವವರು, ಅಲ್ಲಿನ ಬಣ್ಣ ಕಪ್ಪು ಮಿಶ್ರಣ ಹಸಿರು. ಹೀಗೆ ಒಂದು ಸಂದರ್ಭದ ಬಹುಮುಖ್ಯ ಅಂಶಗಳೇ ಗಮನ ಸೆಳೆದು ಬಿಡುತ್ತದೆ.”

Read More

ಧಾರವಾಡದ ದಿನಗಳ ನೆನೆಯುತ್ತಾ…: ಲಕ್ಷ್ಮಣ ವಿ.ಎ. ಅಂಕಣ

“ಎಲೆಯುದುರುವ ಕಾಲವಿದು. ರಾತ್ರಿ ಮೈಯ್ಯೆಲ್ಲ ಥರಗುಟ್ಟುವ ಚಳಿ. ಕಾಲಿಗೆ ಬರುವ ಹೊದಿಕೆ ತಲೆಗೆ ಬರುತ್ತಿರಲಿಲ್ಲ ತಲೆಗೆ ಬಂದದ್ದು ಕಾಲಿಗೆ ಬರುತ್ತಿರಲಿಲ್ಲ. ಅಷ್ಟೇ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ವಿಶೇಷವಾಗಿ ಚಳಿಗಾಲದಲ್ಲಿ ಹೀಗಾಗಿ ತಾಯ ಗರ್ಭದಲ್ಲಿ ಮಗು ಮಲಗಿರುತ್ತದಲ್ಲ ಎರಡು ಕಾಲು ಮಡಚಿ ತಲೆ ತಗ್ಗಿಸಿ ಅರ್ಧ ಬಿಲ್ಲಿನಾಕಾರಾದಲ್ಲಿ ಹಾಗೆ ಮಲಗುತ್ತಿದ್ದೆ, ಧಾರವಾಡದ ಸಪ್ತಾಪೂರದ ಮಿಚಿಗನ್ ಕಂಪೌಂಡಿನ ಸಿಂಗಲ್ ಔಟ್ ಹೌಸ್ ರೂಮಿನಲ್ಲಿ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ