Advertisement

Category: ಅಂಕಣ

ಕಪ್ಪೆಚಿಪ್ಪಿನೊಳಗೆ ಮುತ್ತಾದ ಸೋನೆಮಳೆ…: ಆಶಾ ಜಗದೀಶ್ ಅಂಕಣ

“ಇದ್ದಕ್ಕಿದ್ದಂತೆ ಅವನೆದುರು ಮತ್ತೊಂದು ಹುಡುಗ ಧುತ್ತೆಂದು ಪ್ರತ್ಯಕ್ಷನಾಗುತ್ತಾನೆ. ಅವನ ಕೈಲಿ ಅರಳಿದ ಛತ್ರಿಯಿದೆ. ಆದರವನು ಇವನ ಅಪ್ಪನಿಗೆ ಆಗದವರ ಮಗ. ಇವನು ಇನ್ನೇನು ಸುಮ್ಮನೇ ಅವನನ್ನು ಹಾದು ಹೋಗಬೇಕು… ಅಷ್ಟರೊಳಗೆ ಅವನು ಇವನ ಬಳಿ ಬರುತ್ತಾನೆ. ಇಬ್ಬರೂ ಒಂದೇ ಛತ್ರಿಯಡಿ ನಡೆಯತೊಡಗುತ್ತಾರೆ. ಇಬ್ಬರ ನಡುವೆಯೂ ಮಾತೊಂದಿಲ್ಲ. ಮಳೆ ಸುರಿಯುತ್ತಲೇ ಇದೆ. ನಾಯಿ ಮರಿಗೆ ಒರಗಿಸಿಕೊಳ್ಳುವ ಎದೆ ಸಿಕ್ಕ ಸಂಭ್ರಮ…”

Read More

ರೇಖಕ್ಕ ಕಲಿಸಿದ ಮಗ್ಗಿಯ ಲೆಕ್ಕ: ಶ್ರೀಹರ್ಷ ಸಾಲಿಮಠ ಅಂಕಣ

“ನನ್ನ ಮಗ್ಗಿಯ ಪಾಠ ಇಪ್ಪತ್ನಾಲ್ಕನ್ನೂ ಮುಟ್ಟಲಿಲ್ಲ! ಅದೆಷ್ಟು ತಿಂಗಳು ಹೀಗೆ ಆಕೆಯ ಹಿಂಬಾಲಿಸಿ ಕಳೆದಿದ್ದೆನೋ ನನಗೆ ನೆನಪಿಲ್ಲ. ಆದರೆ ನಾವು ಮನೆ ಬದಲಿಸಲಾಗಿ ಮತ್ತೆಂದೂ ರೇಖಿಯ ಭೇಟಿಯಾಗಲಿಲ್ಲ. ಈಗಲೂ ಒಮ್ಮೊಮ್ಮೆ ರೇಖಿಯಂತಹ ಪ್ರತಿಭಾವಂತೆಯ ಬಳಿ ಪಾಠ ಹೇಳಿಸಿಕೊಂಡಿದ್ದಕ್ಕೆ ಆಗಾಗ ಹೆಮ್ಮೆಯೆನಿಸುತ್ತದೆ. ಆಗ ಆಕೆ ಬದುಕಿದ್ದ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕ ಹಾಕಿದರೆ ಬಹುಷಃ ಹೆಚ್ಚು ಓದಿ ಕಡಿದು ಗುಡ್ಡೆ ಹಾಕಿರಲಿಕ್ಕೆ ಆಕೆಯ ಮನೆಯವರು ಬಿಟ್ಟಿರಲಿಕ್ಕಿಲ್ಲ.”

Read More

ಹೊರಾಂಗಣ ಕಲಿಕೆ ಮತ್ತು ಹೆಣ್ಣಿನ ಒಳದನಿ: ವಿನತೆ ಶರ್ಮಾ ಅಂಕಣ

“ಕೇವಲ ಹೊರಾಂಗಣ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದಲೇ ಅದೆಷ್ಟೋ ಹೆಂಗಸರ ಗಂಡು ಜೀವನಸಂಗಾತಿಗಳು ಅವರನ್ನು ಬಿಟ್ಟುಹೋದದ್ದಿದೆ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಧೈರ್ಯವನ್ನು ತುಂಬಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಕಥೆಗಳಿವೆ. ತಮ್ಮ ಖಾಸಗಿ ಜೀವನದಲ್ಲಿನ ತಮ್ಮ ಸ್ವಲಿಂಗ ಸಂಬಂಧ ಆಯ್ಕೆಯಿಂದಾಗಿ ಕೆಲವರು ಕೆಲಸದ ಸ್ಥಳದಲ್ಲಿ ತಾರತಮ್ಯಕ್ಕೊಳಗಾಗಿ, ಬೆರಳು ತೋರಿಸುವ ಮಂದಿಯ ಕೈಯಲ್ಲಿ ಅನಿಸಿಕೊಂಡು ತಮ್ಮ ವೃತ್ತಿಜೀವನದಲ್ಲಿ ಅದೆಷ್ಟು ನರಳಿದ್ದಾರೆ…”

Read More

ಅಲರ್ಗಣ್ಣೊಳ್ ಸ್ಮರಂ ಇರ್ದನಕ್ಕುಂ: ಆರ್.ದಿಲೀಪ್ ಕುಮಾರ್ ಅಂಕಣ

“ದ್ರೌಪತಿಯನ್ನು, ಸುಭದ್ರೆಯನ್ನು, ಹಿಡಿಂಬೆಯೊಂದಿಗೆ ಭೀಮನ ಸಂಬಂಧವನ್ನು ವರ್ಣಿಸುವಾಗ ಇದ್ದ ಒಂದು ಮಿತಿ ಇಲ್ಲಿ ಮೀರಿದೆ. ಕಾವ್ಯ ಸಂವಿಧಾನ ಮತ್ತು ಕಾವ್ಯದ ಬಂಧ ಅದನ್ನು ಒಪ್ಪುತ್ತದೆ. ಸುಭದ್ರೆಯನ್ನು ನೋಡಿದ ತಾಪ ಪರಿಹಾರಕ್ಕೆ ಅಂದಿನ ರಾತ್ರಿಯೇ ಅರ್ಜುನ ಊರು ಸುತ್ತುವುದು ಇಲ್ಲಿನ ಮುಖ್ಯ ಭಾಗ. ಆದರೆ ಹೋಗುವಾಗ ಅವನಿಗಷ್ಟೇ ಕಾಣುವ ವೇಶ್ಯೆಯರನ್ನು ತೋರಿಸದೆ ಓದುಗರಿಗೂ ಕಾಣಿಸುವಂತೆ ಮಾಡುವುದನ್ನು ನೋಡಿ ಪಂಪನ ರಸಿಕತೆಗೆ…”

Read More

ಕಾಯುವುದಿಲ್ಲ ಕವಿತೆಗೆ ಯಾರೂ ಕವಿಯೊಬ್ಬನಲ್ಲದೆ…: ಲಕ್ಷ್ಮಣ ವಿ.ಎ. ಅಂಕಣ

“ಮೊನ್ನೆ ಮೊನ್ನೆ ನಮ್ ರಸ ಋಷಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಇದ್ದಾಗ ರವೀಂದ್ರ ಕಲಾಕ್ಷೇತ್ರದಾಗ ಒಂದ ಕವಿಗೋಷ್ಠಿ ಇಟ್ಟಿದ್ರು. ನಾಡಿನ ಎಲ್ಲ ಯುವಕವಿಗಳೂ ದಂಡಿ ದಂಡಿಯಾಗಿ ಬಂದಿದ್ರು… ಆದರೆ ಕೇಳೋ ಕಿವಿಗಳು ಅಲ್ಲೊಂದು ಇಲ್ಲೊಂದು…. ಎಲ್ಲಾರೂ ತಮ್ಮ ತಮ್ಮ ಕವಿತೆ ಓದಿದ ಮ್ಯಾಲ ಶಾಲು ಸನ್ಮಾನ ಮಾಡಿಸ್ಕೊಂಡು ಸಿಟಿ ಮಾರ್ಕೆಟಿಗೆ ಸಂತಿ ಮಾಡ್ಲಿಕ್ಕ ಹೋಗಬೇಕ!? ಕೊನೆಗೆ ವೇದಿಕೆ ಮೇಲೆ ಉಳಿದವರು ಕವಿಗೋಷ್ಠಿ ಅಧ್ಯಕ್ಷರು ಮತ್ತು ನಿರೂಪಕರು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ