Advertisement

Category: ಅಂಕಣ

ಲಸಿಕೆ ಪರ-ವಿರೋಧಗಳ ನಡುವೆ ಹಬ್ಬ, ಮಳೆ, ಗಡಿ ತೆರವು

ಈ ಮಧ್ಯೆ ಒಳ್ಳೆಯ ಸುದ್ದಿಯೆಂದರೆ ಕೇಂದ್ರ ಸರಕಾರವು ದೇಶದ ಅಂತಾರಾಷ್ಟ್ರೀಯ ಗಡಿಯನ್ನು ತೆರೆಯುವುದಾಗಿ ಘೋಷಿಸಿದೆ. ರಾಜಕೀಯ ಬರಡು ವಾತಾವರಣದಲ್ಲಿ ಈ ಘೋಷಣೆ ಒಂದಷ್ಟು ಸಂಚಲನವನ್ನು ಹುಟ್ಟಿಸಿದೆ. ನವೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬದ ತಯಾರಿ ಆರಂಭವಾಗುತ್ತ ಜನರೆಲ್ಲರೂ ಹಬ್ಬದಾಚರಣೆಯ ಗುಂಗಿಗೆ ಜಾರುತ್ತಾರೆ. ವರ್ಷವಿಡೀ ದುಡಿದು ವರ್ಷದ ಕಡೆಯಲ್ಲಿ ಬರುವ ಈ ಆಂಗ್ಲೋ-ಯೂರೋಪಿಯನ್ ಹಬ್ಬದ ಸಮಯಕ್ಕಾಗಿ ರಜೆಯನ್ನು ಕಾದಿರಿಸಿ ಕಾತರಿಸುತ್ತಾರೆ.

Read More

ನದಿಯಂತೆ ಸಾಗುವ ಕತೆಗಳಿಗೆ ಮೂಲದ ಹಂಗೇಕೆ

ಎಲ್ಲವನ್ನೂ ಒಂದು ವ್ಯಾಖ್ಯಾನಕ್ಕೆ ಬಗ್ಗಿಸುವುದು, ನಮ್ಮ ಅನುಭವಕ್ಕೆಲ್ಲ ಹೆಸರಿಡುವುದು, ಖಚಿತತೆಗೆ ತಹತಹಿಸುವುದು ಅಥವಾ ಎಲ್ಲದಕ್ಕೂ ಸ್ಥಿರವಾಗಿರುವ ಕಠಿಣವಾಗಿರುವ ಉತ್ತರವೇ ಬೇಕೆಂದು ನಮಗೆ ಅನ್ನಿಸುವುದು, ಬದಲಾಗುತ್ತಿರುವ ಸಮಾಜದ ಅತಂತ್ರತೆಯನ್ನು ನಿಭಾಯಿಸುವ ತಂತ್ರಗಾರಿಕೆ ಇರಬಹುದು. ಹಿಂದಿನದನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ನಮ್ಮ ಅಧಿಕಾರ, ಸ್ಥಾನವನ್ನು ಉಳಿಸಿಕೊಳ್ಳುವ ಬಯಕೆಯಾಗಿಯೂ ಬಂದಿರಬಹುದು.

Read More

“ಭವಿಷ್ಯದ ಕರಾಳತೆಯನ್ನು ಮುಂಗಂಡ ಎರಡು ಕಾದಂಬರಿಗಳು”

ಜಾಗತಿಕ ಪ್ರಭುತ್ವದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯಲ್ಲಿ ಗೋಚರಿಸುವ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ ‘ಎಲ್ಲರೂ ಎಲ್ಲರ ಸಂಬಂಧಿ’. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತಹ ‘ಕಾವುಮನೆ’ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಕಮಲಾಕರ ಕಡವೆ ಅಂಕಣದಲ್ಲಿ ಬ್ರೇವ್ ನ್ಯೂ ವರ್ಲ್ಡ್ ಕಾದಂಬರಿಯ ವಿಶ್ಲೇಷಣೆ. 

Read More

‘ಕಾವ್ಯಾ ಓದಿದ ಹೊತ್ತಿಗೆʼ: ಪುಟ್ಟ ಜಗತ್ತಿನ ದೇವರು ಅವನು

ಇದು ಭಾರತದ ಯಾವುದೇ ಊರಿನಲ್ಲೂ ನಡೆಯಬಹುದಾದ ಕಥೆಯೇ ಆದರೂ ಕೇರಳದ ಸಣ್ಣ ಊರಿನ ಪರಿಸರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ನದಿ, ಮುರಿದ ದೋಣಿಗಳು, ಪಾಳು ಬಿದ್ದ ಮನೆಗಳು, ಅಂಗಡಿ ಮುಂದಿನ ಕಟ್ಟೆಗಳು, ಮಳೆ, ಕಥಕಳಿ ನೃತ್ಯ, ಜನಪದ, ಕಮ್ಯುನಿಸ್ಟ್ ಪಾರ್ಟಿ, ನಕ್ಸಲ್ ಭಯ ಇಂಥ ನೂರಾರು ಸಂಗತಿಗಳ ಜೊತೆಗೆ ಕಾದಂಬರಿ ಕುಸುರಿಗೊಂಡಿದೆ. ಎಲ್ಲಿಯೂ, ಒಂದೂ ಶಬ್ದವನ್ನು ವಾಚ್ಯವಾಗಿಸದೇ, ಮೇಲು ಮೇಲಿನ ಒಂದೂ ಸಂಗತಿಯನ್ನು ಹೇಳದೇ…”

Read More

ಹಲವು ಬದುಕಿನ ಕಥೆಗಳ ಎಳೆಗಳು

ತನ್ನ ತಂದೆ ಹೀಗೆ ಸಾಹುಕಾರು ಹೇಳಿದ ಕೆಲಸ ಮಾಡುತ್ತಾರೆ ಎಂದು ಮಗ ಯೋಚಿಸಿಯೂ ಇರಲಿಲ್ಲ. ಮನೆಯಲ್ಲಿ ಅವರ ಗತ್ತು ಗಾಂಭೀರ್ಯ ನೋಡಿದ್ದ ಮಗನಿಗೆ ಅಪ್ಪನ ಮಾತುಗಳು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಆಷ್ಟರೊಳಗೆ ಸಾಹುಕಾರರ ಮನೆ ಬಂದಿತು. ಸಾಹುಕಾರನ ಹೆಂಡತಿಯ ಎದುರಿಗೆ ಅಪ್ಪ ಕೈ ಕಟ್ಟಿ ಸಾಹುಕಾರರ ಬಗ್ಗೆ ಕೇಳಿದ್ದು ನೋಡಿ ಮಗನಿಗೆ ಕರುಳು ಹಿಂಡಿದಂತಾಗಿತ್ತು. ತನ್ನ ಅಪ್ಪನಿಗಿಂತ ಚಿಕ್ಕವಯಸ್ಸಿನ ಆ ಸಾಹುಕಾರ ಬಂದಾಗ ಅಪ್ಪ ಕೈ ಮುಗಿದು ಬಗೆ ಬಗೆಯಾಗಿ ಕೇಳಿಕೊಂಡಿದ್ದು ನೋಡಿ ಎದೆಯಲ್ಲಿ ಕೆಂಡ ಸುರಿದಂತಾಗಿತ್ತು.
ಪ್ರಶಾಂತ್‌ ಬೀಚಿ ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ