Advertisement

Category: ದಿನದ ಪುಸ್ತಕ

ನಮ್ಮಲ್ಲೇ ಮೊದಲು… ಅಂತರ್ವೀಕ್ಷಣೆ…!

ನಮ್ಮಂತಹ ಎಳೆಯ ಹುಡುಗರಿಗೆ ಬಸ್ಸಿನಲ್ಲಿ ಹೋಗುವ ಸಂದರ್ಭಗಳು ಬಂತೆಂದರೆ ಎಲ್ಲಿಲ್ಲದ ಆನಂದ. ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೋಗುವ ಬಸ್ಸಿಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಒಂದರ್ಧ ಗಂಟೆ ಮುಂಚೆಯೇ ಬಂದು, ಅದಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದೆವು. ಮಲೆನಾಡಿನ ದಾರಿಯಲ್ಲಿ ಬರುವ ಬಸ್ಸಿನ ಪ್ರತಿಧ್ವನಿಯನ್ನು ಆಲಿಸುತ್ತ ಕಾಯುತ್ತಿದ್ದೆವು. ಮೂರು ನಾಲ್ಕು ಕಿ.ಮಿ ಮೊದಲೇ ಇದು ಇಲ್ಲಿಬರುತ್ತಿದೆ ಎಂದು ರೆಡಾರ್ ನಂತೆ ಹೇಳುವುದಕ್ಕೆ ಸಾಧ್ಯವಾಗುವುದು ನಮಗೆ ಮಾತ್ರ.
ನಾಳೆ ರವಿ ಮಡೋಡಿ ಬರೆದ “ನಮ್ಮಲ್ಲೇ ಮೊದಲು” ಲಘು ಬರಹಗಳ ಸಂಕಲನ ಹಾಗೂ ಪೂರ್ಣಿಮಾ ಹೆಗಡೆ ಬರೆದ “ಅಂತರ್ವೀಕ್ಷಣೆ” ಗೀತಾ ಕಥಾಯಾನ ಕೃತಿಗಳು ಬಿಡುಗಡೆಗೊಳ್ಳಲಿದ್ದು, ಎರಡೂ ಕೃತಿಗಳ ಆಯ್ದ ಭಾಗಗಳನ್ನು ನಿಮ್ಮ ಓದಿಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.

Read More

ಜಗವ ಸುತ್ತುವ ಮಾಯೆ….

ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು.
ಸುಚಿತ್ರಾ ಹೆಗಡೆ ಪ್ರವಾಸ ಕಥನ “ಜಗವ ಸುತ್ತುವ ಮಾಯೆ” ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ

Read More

ನಗರ ಜೀವನದ ಬಿಕ್ಕಟ್ಟಿನ ಕತೆಗಳು…

ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ.
ವಸಂತಕುಮಾರ್ ಕಲ್ಯಾಣಿ ಅವರ ಕಥಾಸಂಕಲನ “ಪರ್ಯಾಪ್ತ”ಕ್ಕೆ ಜಿಎಸ್ ಸುಶೀಲಾದೇವಿ ಆರ್ ರಾವ್ ಬರೆದ ಮುನ್ನುಡಿ

Read More

ನೊಂದವರ ಬಾಳಿಗೆ ಮುಲಾಮಾಗುವ ಟೀಚರ್

ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ.
ವೈ.ಜಿ. ಭಗವತಿ ಬರೆದ ಮಕ್ಕಳ ಕಾದಂಬರಿ “ಮಕ್ಕಳು ಓದಿದ ಟೀಚರ್ ಡೈರಿ”ಕೃತಿಯ ಕುರಿತು ನಾಗರಾಜ್‌ ಎಂ. ಹುಡೇದ್‌ ಬರಹ

Read More

ಕಥಾ ಬೇಸಾಯವನ್ನು ಬದುವಿನಲ್ಲಿ ನಿಂತು ನೋಡಿ

ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಸದಾಶಿವ ಸೊರಟೂರು ಕಥಾಸಂಕಲನ “ಅರ್ಧ ಬಿಸಿಲು ಅರ್ಧ ಮಳೆ”ಗೆ ಸ. ರಘುನಾಥ ಬರೆದ ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ