Advertisement

Category: ದಿನದ ಪುಸ್ತಕ

ಚಲಂ ಆತ್ಮಕತೆಯ ಒಂದಿಷ್ಟು ಪುಟಗಳು

ಬಂದಾಗಿನಿಂದ ಸತ್ಯವತಿ, ರತ್ನಮ್ಮ ನನ್ನನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ. ಮದ್ರಾಸ್‍ನಲ್ಲಿರುವ ವೊಯ್ಯಿಯನ್ನು ನೆನಪಿಸಿಕೊಂಡ ಮಾತ್ರಕ್ಕೆ ನನ್ನ ಮನಸು ಪರವಶ ವಾಗುತ್ತಿತ್ತು. ನಾನು ದೈವವನ್ನು ಕಾಂಕ್ಷೆ ಮಾಡಿದಷ್ಟೂ ಕಾಲ, ಎಲ್ಲದಕ್ಕಿಂತ ಆತನೇ ವಾಂಚನಿಯ ನನಗೆ ಆತನೇ ಶರಣ್ಯ. ಆ ಈಶ್ವರನ ಕುರಿತು ಯಾವಾಗ ಅನುಮಾನಗಳು ಮೂಡಿದವೊ, ಅಂದಿನಿಂದ ಸ್ತ್ರೀಯೇ ನನ್ನ ದೈವವಾಯಿತು. ಆಕೆಯಲ್ಲಿಯೆ ನನ್ನ ಜೀವನಕ್ಕೆ ಸಾಫಲ್ಯ. ಅದಕ್ಕಿಂತ ಈ ಲೋಕದಲ್ಲಿ ಬಯಸುವಂತಹದು ಏನೂ ಇಲ್ಲ. ಇದಕ್ಕಿಂತ ಯಾವುದೂ ತೃಪ್ತಿ ಕೊಡುವುದಿಲ್ಲ.
ತೆಲುಗು ಬರಹಗಾರ “ಚಲಂ” ಅವರ ಆತ್ಮಕತೆಯನ್ನು ಕನ್ನಡದ ಕವಿ ಲಕ್ಕೂರು ಆನಂದ್‌ ಕನ್ನಡಕ್ಕೆ ತಂದಿದ್ದು ಅದರ ಕೆಲವು ಪುಟಗಳು ನಿಮ್ಮ ಓದಿಗೆ ಇಲ್ಲಿವೆ. 

Read More

ಓ ಲಕ್ಷ್ಮಣಾ… ಓ ಲಕ್ಷ್ಮಣಾ…

ಇದು ಮಾಯೆ, ಇದಕ್ಕೆ ಬಲಿಬೀಳಬಾರದು ಅನ್ನುವ ಎಚ್ಚರದಲ್ಲಿ ಲಕ್ಷ್ಮಣ ಇದ್ದ. ಹೇಳಿಯೂ ಹೇಳಿದ. ಆದರೆ ಸೀತೆಯನ್ನು ಆಗಲೇ ಮಾಯೆ ಮುಸುಕಿತ್ತು. ಸತ್ಯಾಸತ್ಯದ ವಿವೇಕ ಮರೆಯಾಗಿತ್ತು. ರಾಮನನ್ನು ಕಳುಹಿಸಿದಳು. ಇಬ್ಬರು ಮಾಯೆಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳ ನಡುವೆ ಅದರಿಂದ ಹೊರತಾಗಿ ಉಳಿದ ಲಕ್ಷ್ಮಣ ಅಸಹಾಯಕತೆ, ಆರ್ತತೆ, ಬಳಲಿಕೆಯನ್ನು ತೋರ್ಪಡಿಸುವ ಒಂದು ಪ್ರತಿಮೆಯಾಗಿ ಅದ್ಭುತ ಪದವಾಗಿ, ಓ ಲಕ್ಷ್ಮಣಾ ಓ ಲಕ್ಷ್ಮಣಾ ಅನ್ನುವ ಒಂದು ಕೂಗು ಈ ಇಡೀ ಪ್ರಸಂಗದಲ್ಲಿ ಮತ್ತೆ ಮತ್ತೆ ಅನುರಣಿಸುತ್ತದೆ. ಕಾಡುತ್ತದೆ.
ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯ ಒಂದು ಭಾಗದ ಕುರಿತು ಬರೆದಿದ್ದಾರೆ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Read More

ಮೌನಸಾಕ್ಷಿಗೊಂದು ಮಾತು

ಕನಸಿನ ರೆಕ್ಕೆಗಳನ್ನು ಹಚ್ಚಿಕೊಂಡು ಅಮೆರಿಕಕ್ಕೆ ಹಾರುವ ಭಾರತೀಯರು ಅಲ್ಲಿನ ಅಪರಿಚಿತ ಸಮಾಜವನ್ನು ಬೆರಗುಗಣ್ಣಿನಿಂದ ನೋಡುತ್ತಲೇ ತಾವು ಹೊಸ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಅನಿವಾರ್ಯವಾಗಿ ರೂಢಿಸಿಕೊಂಡಿರುವ ಆಡಂಬರ, ಒಣಪ್ರತಿಷ್ಠೆಗಳ ಜೀವನಶೈಲಿ ಹಾಗೂ ಅವರ ಮಾನಸಿಕ ತುಮುಲಗಳನ್ನುಕಥೆಗಾರರು   ಸೆರೆಹಿಡಿದಿದ್ದಾರೆ. ಇತ್ತ ಭಾರತದ ತೆಲಂಗಾಣದಲ್ಲಿ ಕಂಡ ಸಾಮಾಜಿಕ ಬದುಕಿನ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ನಮ್ಮ ನಾಡಿನ ಜನರ ಕಥೆಗಳೆಂಬಂತೆ ಶುಭಮಂಗಳ ಅವರು ಕನ್ನಡೀಕರಿಸಿದ್ದಾರೆ.
ತೆಲುಗಿನ ಕಥೆಗಾರ ನಕ್ಷತ್ರಂ ವೇಣುಗೋಪಾಲ್‌ ಬರೆದ “ಮೌನಸಾಕ್ಷಿ” ಕಥಾಸಂಕಲನದ ಹನ್ನೊಂದು ಕತೆಗಳನ್ನು ಎಂ.ಜಿ. ಶುಭಮಂಗಳ ಕನ್ನಡಕ್ಕೆ ತಂದಿದ್ದು, ಈ ಸಂಕಲನಕ್ಕೆ ರೂಪದರ್ಶಿ ಜಿ. ವೆಂಕಟೇಶ್‌ ಬರೆದ ಮುನ್ನುಡಿ ಇಲ್ಲಿದೆ

Read More

ಚಂದ್ರಶೇಖರ ಕಂಬಾರರ ಕಾವ್ಯಲೋಕ

ಜಗತ್ತಿನ ಬದಲಾಗಿ ಸಿಕ್ಕ ಭಾಷೆ-ಕಂಬಾರರ ಮಟ್ಟಿಗೆ ಹೇಳುವದಾದರೆ ಅವರಿಗೆ ದೊರೆತ ಜಾನಪದ ಕತೆ, ಕಾವ್ಯ, ಪುರಾಣಗಳು-ಅನೇಕ ಸಂಭಾವ್ಯತೆಗಳಿಂದ ಕೂಡಿರುತ್ತದೆ. ‘ಹೇಳತೇನ ಕೇಳ’ ಕವಿತೆಯ ಶಿವಾಪುರದಲ್ಲಿ ಹಳೆಯ ಗೌಡ ಗೌಡತಿಯರ ಆಳಿಕೆ ಮುಗಿಯುವಂತಾಗಿ ಹೊಸ ಜೀವನ ವ್ಯವಸ್ಥೆ ತಲೆಯೆತ್ತುತ್ತದೆ. ಹೊರಗಿನಿಂದ ಬಂದ ರಾಕ್ಷಸ ಗೌಡನನ್ನು ಕೊಂದು ತಾನೇ ಗೌಡನಾಗಿ ಊರಿನೊಳಗೆ ತಿರುಗಿ ಬರುತ್ತಾನೆ. ದೂರ ದೂರದವರೆಗೆ ಬೇರು ಬಿಳಲುಗಳನ್ನು ಚಾಚಿದ್ದ ಮರವನ್ನು ಕಡಿದು ಅದರ ಸ್ಥಳದಲ್ಲಿ ಹೊಸ ಶಾಲೆಯನ್ನು ಕಟ್ಟಿಸುತ್ತಾನೆ.
ಕೀರ್ತಿನಾಥ ಕುರ್ತಕೋಟಿಯವರು ಬರೆದಿದ್ದ “ಕಂಬಾರರ ಕಾವ್ಯ ಮತ್ತು ನಾಟಕಗಳು” ವಿಮರ್ಶಾ ಸಂಕಲನ ನಾಳೆ ಬಿಡುಗಡೆಯಾಗಲಿದ್ದು ಆ ಕೃತಿಯ ಒಂದು ಲೇಖನ ನಿಮ್ಮ ಓದಿಗೆ

Read More

ಮಕ್ಕಳಾಟವನ್ನು ಭಗವಂತ ಕೂಡ ಆಡಲಾರನು

ಬೆಕ್ಕಿನ ಮರಿ, ಗುಬ್ಬಿಯ ಧ್ವನಿ, ಮ್ಯಾಚಿಂಗ್ ರಿಬ್ಬನ್ ಎಂಬೆಲ್ಲಾ ಬಣ್ಣದ ಲೋಕದೊಂದಿಗೆ ಬದುಕಿನ ಸತ್ಯವನ್ನು ಪರಿಚಯಿಸುವ ಸರಳ ಕವಿತೆಗಳನ್ನು ಬರೆದಿರುವ ಕೆ.ವಿ. ತಿರುಮಲೇಶ್ ಅವರು ಮಕ್ಕಳ ಮನೋಲೋಕದೊಳಗೆ ಸದ್ದಿಲ್ಲದೆ ಹೆಜ್ಜೆಯಿರಿಸಿದ್ದಾರೆ.
“ಚಿಕ್ಕಣಿ ರಾಜ” ಎಂಬ ಬಣ್ಣದ ಚಿತ್ರಗಳಿರುವ ಸುಂದರ ಕವಿತಾ ಸಂಕಲನದ ಅನನ್ಯತೆಯ ಕುರಿತು ಸುಮವೀಣಾ ಅವರು ಬರೆದ ಟಿಪ್ಪಣಿ ಇಲ್ಲಿದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ